ಇತ್ತೀಚೆಗಷ್ಟೇ ಬ್ಲಾಗ್ ಬರೆವಣಿಗೆಗೆ ಪ್ರಾರಂಭಿಸಿದ್ದೇನೆ. ಪ್ರತಿದಿನ ಏನಾದ್ರೂ ಗೀಚಿ ಪ್ರಕಟಿಸಬೇಕು ಅನ್ನೋ ಹುಮ್ಮಸ್ಸು ಜೋರಾಗೆ ಇದೆ.ಆದ್ರೆ ಏನು ಬರೆಯೋದು ಅಂತ ಮಾತ್ರ ಗೊತ್ತಾಗೋದಿಲ್ಲ. ವಿಷಯಗಳಿಗಾಗಿ ಹುಡುಕಾಟ ಸದಾ ಇದ್ದದ್ದೇ.
ಮೊದಲ ಬಾರಿ ಬ್ಲಾಗ್ ಬರೆದು ಪ್ರಕಟಿಸಿದಾಗ ಆದ ಸಂತಸ ಅಷ್ಟಿಷ್ಟಲ್ಲ. ಬರೆವಣಿಗೆ ನನಗಾಗದಿರುವ ವಿಷಯ ಅಂತಾನೆ ತಿಳಿದಿದ್ದೆ. ಅದ್ಯಾವ ಸ್ಪೂರ್ತಿಯೋ ಏನೋ, ಮೊದಲ ಮಿಂಬರೆಹ ಪ್ರಕಟಿಸಿದ ಅನಂತರ ನನ್ನಿಂದಲೂ ಇದು ಸಾಧ್ಯ ಎಂಬ ಆತ್ಮವಿಶ್ವಾಸ ಹೆಚ್ಚಾಗಿದೆ . ಬರೆಯೋದು ಭಾರೀ ಕಷ್ಟದ ಕೆಲಸವೇನು ಅಲ್ಲ. ಆದ್ರೆ ಓದುಗನಿಗೆ ಇಷ್ಟ ಆಗೋ ತರ ಬರೆಯೋದೇ ನಿಜವಾದ ಸವಾಲು. ಬರೆವಣಿಗೆಗೆ ಸ್ಪೂರ್ತಿ ಬರಲು ಓದುಗನ ಧನಾತ್ಮಕ ಅಭಿಪ್ರಾಯ ಮುಖ್ಯ ಅಂತ ನನ್ನ ಅನಿಸಿಕೆ.
ಸಾಧ್ಯವಾದಷ್ಟು ಕನ್ನಡ ಪದಗಳನ್ನೇ ಬಳಸಬೇಕೆಂಬ ನಿರ್ಧಾರ ನನ್ನದು. ಕೆಲ ಕನ್ನಡ ಪದಗಳು ಆಂಗ್ಲ ಭಾಷೆಯಿಂದಾಗಿ ಮರೆತೇ ಹೋಗಿದೆ ಎನ್ನುವುದು ಬೇಜಾರಿನ ಸಂಗತಿ. ಆಂಗ್ಲ ಭಾಷೆ ಅಷ್ಟೊಂದು ನಮ್ಮಲ್ಲಿ ರೂಢಿಯಾಗಿದೆ. ವ್ಯಾವಹಾರಿಕ ಭಾಷೆ ನಮ್ಮ ಮಾತೃಭಾಷೆಯನ್ನೇ ಮರೆಸಿ ಬಿಡುವಷ್ಟು ನಮ್ಮ ದೈನಂದಿನ ಜೀವನದಲ್ಲಿ ಬಳಸುತ್ತಿದ್ದೇವೆ.ಇತರ ಭಾಷೆ ಮಾತನಾಡಲು ಕಲಿಯಬೇಕು ನಿಜ. ಆದ್ರೆ ಆ ಭಾಷೆಗಳಿಂದಾಗಿ ನಮ್ಮ ಭಾಷೆ ಮರೆತುಬಿಡೋದು ಎಷ್ಟು ಸರಿ. ದಯವಿಟ್ಟು ಕನ್ನಡ ಮರೀಬೇಡಿ ಅಂತ ನನ್ನ ವಿನಂತಿ. ಕನ್ನಡ ಮಿಂಬರೆಹಗಳನ್ನು ಹೆಚ್ಚಾಗಿ ಬೆಂಬಲಿಸಿ..
ಮಿಂಬರೆಹಗಳಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ....
No comments:
Post a Comment