
ಇಳೆಗೆ ಮಳೆ ಸುರಿದು
ಸೊಂಪಾಗಿ ಬೆಳೆಯಾಗಲು
ರೈತರ ಮೊಗದಲಿ
ಹರುಷದ ಹೊನಲು

ಇರುವುದೊಂದೇ ಭುವಿಯು
ಬ್ರಹ್ಮಾಂಡದಲಿ
ಯಾಕೆ ದ್ವೇಷ ಮತ್ಸರ ಕಲಹ
ನಮ್ಮ ನಮ್ಮಲಿ

ಸೂರ್ಯನದ್ದು ಹಗಲುಪಾಳಿ
ಚಂದ್ರನದ್ದು ರಾತ್ರಿಪಾಳಿ
ಕೇಳರು ಯಾರ ಬಳಿಯು
ತಮ್ಮ ಕೂಲಿ
ಚಂದ್ರ...
ನಿಲ್ಲಿಸಿ ತನ್ನ ಅಳುವ
ತೋರಿದ ತನ್ನರಳಿದ
ಮುಖಾರವಿಂದ

ಬೇಸಿಗೆಯ ಸುಡುಬಿಸಿಲು
ಎಲ್ಲೆಡೆಯೂ ತಲ್ಲಣ
ಕಾದು ಹೆಂಚಿನಂತಾಗಿದೆ ಭೂಮಿ
ಮುನಿಸೇಕೆ ನಿನಗೆ ವರುಣ
ಕೃಪೆತೋರು ದಯಮಾಡಿ
ತಂಪುಗೈಯಲಿ ಧರೆಯ
ಆ ಮಳೆಯ ಸಿಂಚನ
ಕಾದಿಹೆನು ನಿನಗಾಗಿ
ಓ ನನ್ನ ನಲ್ಲೆ
ನೆಟ್ಟಿಹೆನು ನನ್ನ ಮನ
ಎಂದಿಗೂ ನಿನ್ನಲ್ಲೇ
ಜೋಡಿಹಕ್ಕಿಯಾಗಿ ನಾವು
ಹಾರೋಣ ಮುಗಿಲೆತ್ತರ
ಬಾನಿಗೆಲ್ಲಿಯ ಎಲ್ಲೆ
ಕಾಡದಿರು ನನ್ನ
ಓ ಬೆಳದಿಂಗಳ ಬಾಲೆ
ಆಗಲು ಕತ್ತಲ ಹೊತ್ತು
ಇಲ್ಲ ಎಲ್ಲಿಯೂ ವಿದ್ಯುತ್ತು
ದಿನವಿಡೀ ಮಲಗಿಹುದು
ನಮ್ಮ ವಿದ್ಯುತ್ತು ನಿಗಮ
ಬಿಡರು ಯಾರನ್ನೂ
ಬದುಕಲು ಆರಾಮ
ಧರಿಸಲೇಬೇಕಂತೆ
ದ್ವಿಚಕ್ರ ಸವಾರರು ಶಿರಸ್ತ್ರಾಣ
ಇದು ಕಟ್ಟುನಿಟ್ಟಿನ ನಿಯಮ
ಆದರೂ ಸ್ವಲ್ಪ ಕಿರಿಕಿರಿ
ಸಹಿಸೋಣ, ಯಾಕೆಂದರೆ....
ಕಾಪಾಡುವುದಿದು
ಸವಾರರ ಪ್ರಾಣ

ನೆಟ್ಟಿಹೆನು ನನ್ನ ಮನ
ಎಂದಿಗೂ ನಿನ್ನಲ್ಲೇ
ಜೋಡಿಹಕ್ಕಿಯಾಗಿ ನಾವು
ಹಾರೋಣ ಮುಗಿಲೆತ್ತರ
ಬಾನಿಗೆಲ್ಲಿಯ ಎಲ್ಲೆ
ಕಾಡದಿರು ನನ್ನ
ಓ ಬೆಳದಿಂಗಳ ಬಾಲೆ
ಆಗಲು ಕತ್ತಲ ಹೊತ್ತು
ಇಲ್ಲ ಎಲ್ಲಿಯೂ ವಿದ್ಯುತ್ತು
ದಿನವಿಡೀ ಮಲಗಿಹುದು
ನಮ್ಮ ವಿದ್ಯುತ್ತು ನಿಗಮ
ಬಿಡರು ಯಾರನ್ನೂ
ಬದುಕಲು ಆರಾಮ
ಧರಿಸಲೇಬೇಕಂತೆ
ದ್ವಿಚಕ್ರ ಸವಾರರು ಶಿರಸ್ತ್ರಾಣ
ಇದು ಕಟ್ಟುನಿಟ್ಟಿನ ನಿಯಮ
ಆದರೂ ಸ್ವಲ್ಪ ಕಿರಿಕಿರಿ
ಸಹಿಸೋಣ, ಯಾಕೆಂದರೆ....
ಕಾಪಾಡುವುದಿದು
ಸವಾರರ ಪ್ರಾಣ
No comments:
Post a Comment