amazon

Friday, April 14, 2017

ಆಶು ಕವಿತೆಗಳು- ಭಾಗ ೧




ನವಕವಿ
ಬರೆಯಲೆಂದು ಹೊರಟೆ
ನಾನೊಂದು ಕವಿತೆ
ಆಗಲಿಲ್ಲ,
ಏಕೆಂದರೆ ನನ್ನಲ್ಲಿ
ಪದಗಳ ಕೊರತೆ.../



ಚುಟುಕು
 ಕವಿಯಾಗಲೆಂದು ಹೊರಟು ಬರೆದಿದ್ದ   
 ಆ  ನಾಲ್ಕು ಸಾಲುಗಳು,
 ಗೊತ್ತಿಲ್ಲದೇ ಆದವು ಆಶು ಕವಿತೆ 
 ಓದಿದರೆ ಮಾಡಿಕೊಳ್ಳಬೇಡಿ ದಯಮಾಡಿ ಚಿಂತೆ.../


 ಬದುಕು
ನಿನ್ನೆಯ ನೆನಪಲ್ಲಿ
ನಾಳೆಯ ಭರವಸೆಗಾಗಿ
ಹಾತೊರೆಯುವ ಕ್ಷಣಿಕ
ವರ್ತಮಾನ.../


ಅನಾಮಧೇಯ
ಇರುವೆ ನಾನು ನನ್ನಷ್ಟಕ್ಕೆ
ಎಲೆಮರೆಯ ಕಾಯಂತೆ...
ಹಂಬಲವಿಲ್ಲ ನನ್ನಲ್ಲೇನು
ಯಾಕೆ ಬೇಕು ಜಗದ ಅಂತೆ  ಕಂತೆ.../


ಕ್ಷಮೆ 
ಚಂದಿರ  ಕೇಳಿದ ಸೂರ್ಯನ ಬಳಿ
ಯಾಕೋ ಸುಡ್ತೀಯಾ ಪಾಪ, ಭೂಮಿಯನ್ನ..
ಸೂರ್ಯನಂದ,
ಕ್ಷಮಿಸು,  ನಾನು ಸುಡ್ತಿರೋದು
ಭೂಮಿ ತಾಯಿ  ಗರ್ಭ ಸೀಳೋ
ಪಾಪಿ ಮನುಜರನ್ನ.../


ಕವಿತೆ
ಮೂರಕ್ಷರದಿ ನೂರಕ್ಷರದ
ಭಾವಗೀತೆ
ಹೆಸರಲ್ಲೇ ಇದೆ, ಇದು
ಕವಿಯ ಕಥೆ.../


ವಿರಹ
ಹರವಿಯೊಳಗೆ ವಿರಹದಿಂದ
ಏಕೆ ಇರುವೆ ರವಿಯೇ..
ವಿರಹಿಯಾಗಿ  ಇರಲು ನೀನು
ಭೂಮಿಯನ್ನು ಸುಡುವೆ.../



ನೆನಪು
ಸುಡುವನೆಂದು ನೆಪವನ್ನೊಡ್ಡಿ
ಮರೆತಿಲ್ಲ ಭೂಮಿ
ತಿರುಗುವುದನ್ನು ಸೂರ್ಯನ ಸುತ್ತಾ..
ಕಾರಣ, ಸೂರ್ಯನೇ
ಆಕೆಯ ಜನ್ಮದಾತ.../


ಕವನ
ಮರುಭೂಮಿಯ
ನೀರೊಸರಿನಂತೆ
ಮನಕೆ ಮುದ ನೀಡುವ
ಮರೀಚಿಕೆ.../


ಜೀವನ
 ಹುಟ್ಟು-ಸಾವು ಮಧ್ಯೆ ಇರುವ
ಹೋರಾಟವೇ ಜೀವನ
ತಿಳಿದು ನಡೆಸೆ, ಜನುಮವಿದು
ಆಗುವುದು ಪಾವನ.../





 



No comments:

Post a Comment