ನವಕವಿ
ಬರೆಯಲೆಂದು ಹೊರಟೆ
ನಾನೊಂದು ಕವಿತೆ
ಆಗಲಿಲ್ಲ,
ಏಕೆಂದರೆ ನನ್ನಲ್ಲಿ
ಪದಗಳ ಕೊರತೆ.../
ಚುಟುಕು
ಕವಿಯಾಗಲೆಂದು ಹೊರಟು ಬರೆದಿದ್ದ
ಆ ನಾಲ್ಕು ಸಾಲುಗಳು,
ಗೊತ್ತಿಲ್ಲದೇ ಆದವು ಆಶು ಕವಿತೆ
ಗೊತ್ತಿಲ್ಲದೇ ಆದವು ಆಶು ಕವಿತೆ
ಓದಿದರೆ ಮಾಡಿಕೊಳ್ಳಬೇಡಿ ದಯಮಾಡಿ ಚಿಂತೆ.../
ಬದುಕು
ನಿನ್ನೆಯ ನೆನಪಲ್ಲಿ
ನಾಳೆಯ ಭರವಸೆಗಾಗಿ
ಹಾತೊರೆಯುವ ಕ್ಷಣಿಕ
ವರ್ತಮಾನ.../
ಅನಾಮಧೇಯ
ಇರುವೆ ನಾನು ನನ್ನಷ್ಟಕ್ಕೆ
ಎಲೆಮರೆಯ ಕಾಯಂತೆ...
ಹಂಬಲವಿಲ್ಲ ನನ್ನಲ್ಲೇನು
ಯಾಕೆ ಬೇಕು ಜಗದ ಅಂತೆ ಕಂತೆ.../
ಕ್ಷಮೆ
ಚಂದಿರ ಕೇಳಿದ ಸೂರ್ಯನ ಬಳಿ
ಯಾಕೋ ಸುಡ್ತೀಯಾ ಪಾಪ, ಭೂಮಿಯನ್ನ..
ಸೂರ್ಯನಂದ,
ಕ್ಷಮಿಸು, ನಾನು ಸುಡ್ತಿರೋದು
ಭೂಮಿ ತಾಯಿ ಗರ್ಭ ಸೀಳೋ
ಪಾಪಿ ಮನುಜರನ್ನ.../
ಕವಿತೆ
ಮೂರಕ್ಷರದಿ ನೂರಕ್ಷರದ
ಭಾವಗೀತೆ
ಹೆಸರಲ್ಲೇ ಇದೆ, ಇದು
ಕವಿಯ ಕಥೆ.../
ವಿರಹ
ಹರವಿಯೊಳಗೆ ವಿರಹದಿಂದ
ಏಕೆ ಇರುವೆ ರವಿಯೇ..
ವಿರಹಿಯಾಗಿ ಇರಲು ನೀನು
ಭೂಮಿಯನ್ನು ಸುಡುವೆ.../
ನೆನಪು
ಸುಡುವನೆಂದು ನೆಪವನ್ನೊಡ್ಡಿ
ಮರೆತಿಲ್ಲ ಭೂಮಿ
ತಿರುಗುವುದನ್ನು ಸೂರ್ಯನ ಸುತ್ತಾ..
ಕಾರಣ, ಸೂರ್ಯನೇ
ಆಕೆಯ ಜನ್ಮದಾತ.../
ಕವನ
ಮರುಭೂಮಿಯ
ನೀರೊಸರಿನಂತೆ
ಮನಕೆ ಮುದ ನೀಡುವ
ಮರೀಚಿಕೆ.../
ಜೀವನ
ಹುಟ್ಟು-ಸಾವು ಮಧ್ಯೆ ಇರುವ
ಹೋರಾಟವೇ ಜೀವನ
ತಿಳಿದು ನಡೆಸೆ, ಜನುಮವಿದು
ಆಗುವುದು ಪಾವನ.../
ಬದುಕು
ನಿನ್ನೆಯ ನೆನಪಲ್ಲಿ
ನಾಳೆಯ ಭರವಸೆಗಾಗಿ
ಹಾತೊರೆಯುವ ಕ್ಷಣಿಕ
ವರ್ತಮಾನ.../
ಅನಾಮಧೇಯ
ಇರುವೆ ನಾನು ನನ್ನಷ್ಟಕ್ಕೆ
ಎಲೆಮರೆಯ ಕಾಯಂತೆ...
ಹಂಬಲವಿಲ್ಲ ನನ್ನಲ್ಲೇನು
ಯಾಕೆ ಬೇಕು ಜಗದ ಅಂತೆ ಕಂತೆ.../
ಕ್ಷಮೆ
ಚಂದಿರ ಕೇಳಿದ ಸೂರ್ಯನ ಬಳಿ
ಯಾಕೋ ಸುಡ್ತೀಯಾ ಪಾಪ, ಭೂಮಿಯನ್ನ..
ಸೂರ್ಯನಂದ,
ಕ್ಷಮಿಸು, ನಾನು ಸುಡ್ತಿರೋದು
ಭೂಮಿ ತಾಯಿ ಗರ್ಭ ಸೀಳೋ
ಪಾಪಿ ಮನುಜರನ್ನ.../
ಕವಿತೆ
ಮೂರಕ್ಷರದಿ ನೂರಕ್ಷರದ
ಭಾವಗೀತೆ
ಹೆಸರಲ್ಲೇ ಇದೆ, ಇದು
ಕವಿಯ ಕಥೆ.../
ವಿರಹ
ಹರವಿಯೊಳಗೆ ವಿರಹದಿಂದ
ಏಕೆ ಇರುವೆ ರವಿಯೇ..
ವಿರಹಿಯಾಗಿ ಇರಲು ನೀನು
ಭೂಮಿಯನ್ನು ಸುಡುವೆ.../
ನೆನಪು
ಸುಡುವನೆಂದು ನೆಪವನ್ನೊಡ್ಡಿ
ಮರೆತಿಲ್ಲ ಭೂಮಿ
ತಿರುಗುವುದನ್ನು ಸೂರ್ಯನ ಸುತ್ತಾ..
ಕಾರಣ, ಸೂರ್ಯನೇ
ಆಕೆಯ ಜನ್ಮದಾತ.../
ಕವನ
ಮರುಭೂಮಿಯ
ನೀರೊಸರಿನಂತೆ
ಮನಕೆ ಮುದ ನೀಡುವ
ಮರೀಚಿಕೆ.../
ಜೀವನ
ಹುಟ್ಟು-ಸಾವು ಮಧ್ಯೆ ಇರುವ
ಹೋರಾಟವೇ ಜೀವನ
ತಿಳಿದು ನಡೆಸೆ, ಜನುಮವಿದು
ಆಗುವುದು ಪಾವನ.../
No comments:
Post a Comment