೧. ಮರೆತಿಲ್ಲ ನಾನು
ಕನ್ನಡವ ಪೂರ್ತಿ
ಡುಂಡಿರಾಜರೇ ನನ್ನ
ಚುಟುಕಗಳಿಗೆ ಸ್ಫೂರ್ತಿ
೨. ಕಳೆದರೂ ಡುಂಡಿರಾಜರಿಗೆ
ವರ್ಷ ಅರವತ್ತು
ಮರೆತಿಲ್ಲ ಚುಟುಕ
ಬರೆಯುವುದ ಯಾವತ್ತೂ
೩. ಬಂದಿಲ್ಲ ನಿನಗಿನ್ನೂ
ಸರಿಯಾಗಿ ಗಡ್ಡ
ಓಲಾಡುವೆಯೇಕೆ ನೀ
ಹೊಟ್ಟೆಗಿಳಿಸಿ ಎಣ್ಣೆ
ಅಡ್ದಾದಿಡ್ಡ
೪. ಬರೆ ಬರೆದು ಗೀಚಿದೆ
ನಾ-ನೂರು ಕವಿತೆ
ಸಾಕಲ್ಲವೇ ಪ್ರಕಟಿಸಲು
ಚಂದದೊಂದು ಹೊತ್ತಿಗೆ
೫. ಜಗವಿದು ಆ ದೇವನ
ಅದ್ಭುತ ಸೃಷ್ಟಿರೂಪ
ಮಾನವನಿಂದಾಯ್ತು
ವಿರೂಪ
ಪ್ರತಿಫಲ, ಅಲ್ಲಲ್ಲಿ
ಪ್ರಕೃತಿ ವಿಕೋಪ
೬.ಇದೆ ಪ್ರತಿದಿನವೂ
ಜನ ಸಂಚಾರ ಊರಿಂದ ಊರಿಗೆ
ಯಾಕೆ ಬೇಕು
ತಲೆಗೊಂದು ವಾಹನ
ಇದೆಯಲ್ಲ,
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ
೭. ಸುಖ ಸಂಸಾರಕ್ಕೆ
ಇರುವುದೊಂದೇ ಸೂತ್ರ
ಗೃಹಮಂತ್ರಿ ಹೇಳಿದಂತೆ
ಕೇಳುವುದು ಮಾತ್ರ
ಇಲ್ಲದಿದ್ದರೆ ಉಂಟು
ಬೈಗುಳದ ಗೀತೆ
ಗಂಡನ ಸ್ಥಿತಿ ಪಾಪ
ಸತ್ತ ಹಾತೆ
೮. ಮಳೆ ಇಲ್ಲ ಬೆಳೆ ಇಲ್ಲ
ನಾಡ ತುಂಬಾ ಬರ
ಕಾರಣವಿಷ್ಟೆ, ಕಡಿಯುತಿಹರು
ಯದ್ವಾತದ್ವಾ ಮರ
೯. ಸುತ್ತಲೂ
ಕವಿದಿದೆ ಕತ್ತಲು
ಸಮಯವಿದು ಮೈಮರೆತು
ಹಾಯಾಗಿ ಮಲಗಲು
೧೦. ನೆರವಿಯಲಿ ಕೈ
ಸವರಿದಳೋರ್ವ ಅಂಗನೆ
ಆವರಿಸಿತು ನನ್ನ ಮನವ
ತಿಳಿಯದೇನೋ ಭಾವನೆ
ಅಯ್ಯಯ್ಯೋ..
ಆಮೇಲೆ ತಿಳಿದುದು ನನ್ನ ಪರ್ಸ್
ಕದ್ದ ಕಳ್ಳಿ ಆಕೇನೆ.. :(
೬.ಇದೆ ಪ್ರತಿದಿನವೂ
ಜನ ಸಂಚಾರ ಊರಿಂದ ಊರಿಗೆ
ಯಾಕೆ ಬೇಕು
ತಲೆಗೊಂದು ವಾಹನ
ಇದೆಯಲ್ಲ,
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ
೭. ಸುಖ ಸಂಸಾರಕ್ಕೆ
ಇರುವುದೊಂದೇ ಸೂತ್ರ
ಗೃಹಮಂತ್ರಿ ಹೇಳಿದಂತೆ
ಕೇಳುವುದು ಮಾತ್ರ
ಇಲ್ಲದಿದ್ದರೆ ಉಂಟು
ಬೈಗುಳದ ಗೀತೆ
ಗಂಡನ ಸ್ಥಿತಿ ಪಾಪ
ಸತ್ತ ಹಾತೆ
೮. ಮಳೆ ಇಲ್ಲ ಬೆಳೆ ಇಲ್ಲ
ನಾಡ ತುಂಬಾ ಬರ
ಕಾರಣವಿಷ್ಟೆ, ಕಡಿಯುತಿಹರು
ಯದ್ವಾತದ್ವಾ ಮರ
೯. ಸುತ್ತಲೂ
ಕವಿದಿದೆ ಕತ್ತಲು
ಸಮಯವಿದು ಮೈಮರೆತು
ಹಾಯಾಗಿ ಮಲಗಲು
೧೦. ನೆರವಿಯಲಿ ಕೈ
ಸವರಿದಳೋರ್ವ ಅಂಗನೆ
ಆವರಿಸಿತು ನನ್ನ ಮನವ
ತಿಳಿಯದೇನೋ ಭಾವನೆ
ಅಯ್ಯಯ್ಯೋ..
ಆಮೇಲೆ ತಿಳಿದುದು ನನ್ನ ಪರ್ಸ್
ಕದ್ದ ಕಳ್ಳಿ ಆಕೇನೆ.. :(
No comments:
Post a Comment