ನಿನ್ನ ದನಿಗೆ
ಕಿವಿಯಾಗುವ ಹಂಬಲ
ಕಾಯುವ ತಾಳ್ಮೆಯಿಲ್ಲ
ನನ್ನಲಿ ಮೂಡಿಹುದು
ಆಸೆ ಪ್ರಬಲ
ಏಕೆ ಕಾಯ್ದುಕೊಂಡಿರುವೆ
ನನ್ನಿಂದ ಅಂತರ
ನಿನ್ನ ನೆನಪು
ಎಂದಿಗೂ ನನ್ನಲಿ
ಅಜರಾಮರ
ಭಾಯಿ-ಭಾಯಿಯಂತೆ
ಹಿಂದಿ-ಚೀನಿ
ಬೊಗಳೆ ಬಿಟ್ಟಿದ್ದು
ಪ್ರಥಮ ಪ್ರಧಾನಿ
ಆರೋಗ್ಯಕ್ಕೆ ಹಿತ
ಕುಡಿದರೆ ಎಳನೀರು
ಆದರೀಗ ಬರಿಯ ರಾಸಾಯನಿಕಯುಕ್ತ
ಪಾನೀಯಗಳದೇ ಕಾರುಬಾರು
ಮರೆತಿದ್ದೇವೆ ತೆಂಗೆಂಬ
ಕಲ್ಪತರು
ಕೆಟ್ಟರೂ ಗಡಿಯಾರ
ತೋರಿಸುವುದಿಲ್ಲವೇ ಸರಿ-
ಸಮಯ
ದಿನಕ್ಕೆರಡು ಬಾರಿ
ಬೇಡ ನನಗೆ ಕಛೇರಿ
ಕೆಲಸದ ದಿನಚರಿ
ಆಗಬೇಕೆಂಬ ಆಸೆ
ಬಲವಾಗಿದೆ
ಕೃಷಿಯಲ್ಲಿ ಮಾದರಿ
ಹಾಲಿವುಡ್ಡಿಗೆ ಎಂಟ್ರಿ
ಕೊಡಲಿದ್ದಾರಂತೆ
ಅಭಿನಯ ಚಕ್ರವರ್ತಿ
ಕಿಚ್ಚ ಸುದೀಪ
ನಮ್ಮ ಹಾರೈಕೆ,
ತೋರಿಸಲಿ ಅಲ್ಲೂ ತಮ್ಮ
ಅಭಿನಯ ಪ್ರತಾಪ
TRP ಹಿಂದೆ ಬಿದ್ದ
ಟಿವಿ ಚಾನಲ್ಲು
ವೀಕ್ಷಕರಿಗೆ ತೋರಿಸೋದು
ಬರಿಯ ಓಳು
೫ ವರ್ಷಗಳ ಸರ್ಕಾರ
ಮುಗಿಯುತಲಿಹುದು ಮಾನ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಸಾಧನೆಯೇನು? ಕೇಳಲು,
ಕೊಟ್ಟಿಹರಂತೆ ಹಲವು ಭಾಗ್ಯ
ಆದರೇನು? ಪ್ರಜೆಗಳ
ಸ್ಥಿತಿ ಅಯೋಮಯ..
ಗೋವಿನಿಂದಲೇ ನಾವು
ಎಂದರಿತರಿಲ್ಲ ನೋವು
ಬಾಳು ಬಂಗಾರವಂತೆ
ಇರದು ಎಂದೂ
ಕಷ್ಟವೆಂಬ ಬೇವು...
No comments:
Post a Comment