ನಾ ಮನಸೋತೆ
ಕಾರಣ ಆ ನಿನ್ನ
ಮುಗುಳುನಗೆ
ಆವರಿಸಿದೆ ನನ್ನ
ಕಣಕಣದಲು
ಸಂತಸದ ಬುಗ್ಗೆ
ಅತ್ತ ಪಾಕಿಸ್ತಾನ
ಇತ್ತ ಚೀನಾ
ತಪ್ಪಿದ್ದಲ್ಲ ಕದನ?
ಮುಂದುವರೆದರೆ ರಗಳೆ
ಇದೆ ರೀತಿ, ಪ್ರತಿದಿನ..
ಆತ ಹೇಳಿದ.. ತೋರಿಸಿ,
"ಆಕೆ ನನ್ನ ಗೆಳತಿ"
ವರ್ಷವಾಗುವುದರೊಳಗೆ ಆದರು
ಅವರಿಬ್ಬರು ಗಂಡಹೆಂಡತಿ
ಈಗ ಗಲಾಟೆ
ದಿನಪೂರ್ತಿ
ನೋಡಲಾಗುತ್ತಿಲ್ಲ.. ಅಯ್ಯೋ ಪಾಪ
ಆತನ ಫಜೀತಿ...
ಯಾರಲಿ ಹೇಳೋದು
ನಮ್ಮ ಕಷ್ಟ...
ನಮ್ಮದು ಜನರಲ್ ಮೆರಿಟ್ಟು
ಎಲ್ಲರಿಗಿದೆ ಸರಕಾರದ
ಮೀಸಲಾತಿ
ನಮ್ಮನು ಬಿಟ್ಟು
ಆಗುವೆಯ ನೀ
ನನ್ನ ಮನದರಾಣಿ
ನೀನಿರಲು ಜೊತೆ
ಸಾಗಲೇನು ಅಡ್ಡಿ
ಈ ಬಾಳದೋಣಿ
ಕುಣಿದು ಕುಪ್ಪಳಿಸಿದರು
ಮಳೆಯಲಿ, ಬರಿಯ
ನಾಣ್ಯಗಳಿದ್ದವರು..
ಆಶ್ರಯಕ್ಕಾಗಿ ಓಡಿದರು
ಹಲವರು
ಬರೇ ನೋಟುಗಳಿದ್ದವರು
ಆತ ಹೇಳಿದ.. ತೋರಿಸಿ,
"ಆಕೆ ನನ್ನ ಗೆಳತಿ"
ವರ್ಷವಾಗುವುದರೊಳಗೆ ಆದರು
ಅವರಿಬ್ಬರು ಗಂಡಹೆಂಡತಿ
ಈಗ ಗಲಾಟೆ
ದಿನಪೂರ್ತಿ
ನೋಡಲಾಗುತ್ತಿಲ್ಲ.. ಅಯ್ಯೋ ಪಾಪ
ಆತನ ಫಜೀತಿ...
ಯಾರಲಿ ಹೇಳೋದು
ನಮ್ಮ ಕಷ್ಟ...
ನಮ್ಮದು ಜನರಲ್ ಮೆರಿಟ್ಟು
ಎಲ್ಲರಿಗಿದೆ ಸರಕಾರದ
ಮೀಸಲಾತಿ
ನಮ್ಮನು ಬಿಟ್ಟು
ಆಗುವೆಯ ನೀ
ನನ್ನ ಮನದರಾಣಿ
ನೀನಿರಲು ಜೊತೆ
ಸಾಗಲೇನು ಅಡ್ಡಿ
ಈ ಬಾಳದೋಣಿ
ಕುಣಿದು ಕುಪ್ಪಳಿಸಿದರು
ಮಳೆಯಲಿ, ಬರಿಯ
ನಾಣ್ಯಗಳಿದ್ದವರು..
ಆಶ್ರಯಕ್ಕಾಗಿ ಓಡಿದರು
ಹಲವರು
ಬರೇ ನೋಟುಗಳಿದ್ದವರು
ನಾಲ್ಕು ಸಾಲು
ಗೀಚಲು ಯಾರದೇನು ಸ್ಪೂರ್ತಿ?
ಮನದ ಗುಡಿಯಲಿ
ಬೆಳಗುತಿರೆ ಆ
ಮೋಹಕ ಮೂರ್ತಿ
ನಾಲ್ಕು ದಿನದ
ಈ ಬಾಳು
ತಪ್ಪಿದ್ದಲ್ಲ, ಅನುದಿನವೂ
ಏನಾದರೊಂದು ಗೋಳು
ಯೋಚಿಸಿ, ಚಿಂತಿಸಿ
ಕೂದಲುದುರಿದೆ
ತಲೆಯಾಗಿದೆ ಬೋಳು
ಖುಷಿಯಾಗಿದ್ದ ಆತ
ಕಾರಣ ನಿಶ್ಚಯವಾಗಿತ್ತು
ವಿವಾಹ
ಆರಂಭದಲ್ಲಿ
ಸಂತಸದ ಪ್ರವಾಹ
ಈಗ ಅನುದಿನವು ಕಲಹ..
ಆಹಾ, ಒಹೋ
ಎನ್ನಲು ಜನ,
ಓದಿ ನನ್ನ ಕವಿತೆ.
ಮೂಕವಿಸ್ಮಿತ ನಾ,
ಮಾತು ಮರೆತೆ.
ಅಲಾರಾಂ ದನಿ ಕೇಳಿ
ಕನಸು ಭಗ್ನವಾಗಿ
ಎದ್ದು ಕುಳಿತೆ..
No comments:
Post a Comment