amazon

Sunday, July 9, 2017

ಆಶು ಕವಿತೆಗಳು- ಭಾಗ ೬

ರಾಜ್ಯದಾದ್ಯಂತ  ಅಲ್ಲಲ್ಲಿ
ತುಂತುರು ಮಳೆ 
ಅಂತೂ ತಂಪಾಯ್ತು ಇಳೆ 
ಮಾಡ್ಕೊಂಡು ಸ್ನಾನ 
ತೊಳ್ಕೊಳ್ಳಿ ಕೊಳೆ 

ನೀರಿಲ್ಲ ನೀರಿಲ್ಲ 
ಎಂದು ಪಟ್ಟರೇನು ಬವಣೆ 
ಮಾಡಬೇಕು ಮಳೆಗಾಲ 
ಮನೆಯಂಗಳದಿ ಜಲಸಂರಕ್ಷಣೆ 


ಹೋಗೆ ಇರಲಿಲ್ಲ ಸಿದ್ದರಾಮಯ್ಯ 
ಮುಖ್ಯಮಂತ್ರಿಯಾಗಿ 
ವಿದೇಶ ಪಯಣ 
ಕೊನೆಗೂ ದುಬೈಗೆ ಹೋಗಿ 
ಮಾಡಿದ್ದು ನಿದ್ದೆನಾ!!??


ಕಟ್ಟಿದರು ಕೇಜ್ರಿ ಭ್ರಷ್ಟಾಚಾರದ
ವಿರುದ್ಧ ರಾಜಕೀಯ ಪಕ್ಷ
ಹೆಸರಿಟ್ಟರು ಆಮ್ ಆದ್ಮಿ
ವಿಪರ್ಯಾಸ ನೋಡಿ
ಮಾಡೋದ್ರಲ್ಲಿ ಭ್ರಷ್ಟಾಚಾರ
ಅವರೇನೂ ಇಲ್ಲ ಕಮ್ಮಿ


Image may contain: 2 people
















ಹಾಗೂ ಹೀಗೂ ಕಳೆದಿದೆ
ಸಿದ್ದು ಸರ್ಕಾರ
ನಾಲ್ಕು ವರ್ಷಗಳ ಕಾಲ
ಮಾಡಿದ್ದು ಮಾತ್ರ
ಕೋಟಿ ಕೋಟಿ ಸಾಲ ಸೋಲ
ಇನ್ನೂ ವರ್ಷ ಒಂದಿದೆ
ಮಾಡೋದು ಗ್ಯಾರಂಟಿ ನಿದ್ದೆ


ಅಪರೂಪಕ್ಕೆ  ಸಿಟ್ಟಾಗಿಹಳು
ನನ್ನ ನಲ್ಲೆ
ದೇವರೇ  ಕಾಪಾಡಬೇಕು
ಆಗಿರುವೆ ನಾ
ಹೆದರಿದ ಹುಲ್ಲೆ

ಏನಾಗಿದೆ, ನಾ ಅರಿಯೆ..
ಈ ಮನದ ತಾಕಲಾಟ
ಬರಿಯ ತೊಳಲಾಟ
ಮಾಡಿರುವೆ ನೀ
ಏನೋ ತಿಳಿಯದ
ಮೋಡಿ ಮಾಟ

 ಕವನಗಳ ಬರೆಯುವದಲ್ಲ
ನನ್ನ ಚಿಂತೆ
ಹೇಗೆ ಪೋಣಿಸಲಿ ಪದಗಳ
ಬರೆಯಲು ಹನಿಗವಿತೆ

ಏನೂ  ಆಗುತ್ತಿಲ್ಲ
ಅಂದುಕೊಂಡಂತೆ  ನಾನು
ಎಲ್ಲವನು ತಾಳಕ್ಕೆ ತಕ್ಕಂತೆ
ಕುಣಿಸುವುದು ಆ ಕಾಲನ ಪ್ಲಾನು


ನಿನ್ನದು ಭರಪೂರ
ಸೌಂದರ್ಯದ ಒರತೆ
ವರ್ಣಿಸಲು ಅಸಹಾಯಕ
ನಾನು.. ಏಕೆಂದರೆ
ನನ್ನಲಿ ಪದಗಳ
ಕೊರತೆ








No comments:

Post a Comment